ಬಗೆಹರಿಯದ ಟ್ರಾಫಿಕ್ ಸಿಗ್ನಲ್ ಸಮಸ್ಯೆ : ದಿನನಿತ್ಯ ವಾಹನ ಸವಾರರ ಪರದಾಟ

ದೊಡ್ಡಬಳ್ಳಾಪುರ : ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ಪ್ರವಾಸಿ ಮಂದಿರ ಮುಂಭಾಗದ ಟ್ರಾಫಿಕ್ ಸಿಗ್ನಲ್ ಹಲವು ತಿಂಗಳು ಗಳಿಂದ ಕೆಟ್ಟು ನಿಂತಿದ್ದು ವಾಹನ ಸವಾರರ ಗೋಳು ಕೆಳದಂಥಾಗಿದೆ

ನಾಲ್ಕು ರಸ್ತೆಗಳನ್ನು ಒಳಗೊಂಡಿರುವ ಈ ವೃತ ದಲ್ಲಿ ಅತಿಯಾದ ವಾಹನಗಳು ಚಲಿಸುವ ಕಾರಣ ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದ್ದು ಬೆಳಗಿನ ಸಮಯದಲ್ಲಿ ಶಾಲೆಗೆ ಹೋಗುವ ಮಕ್ಕಳ ಸ್ಥಿತಿ ಚಿಂತಾಜನಕವಾಗಿದೆ ಬೇಗ ಹೋಗಬೇಕೆನ್ನುವ ಅತುರದಲ್ಲಿ ವಾಹನ ಸವಾರರು ರಸ್ತೆಯ ನಿಯಮಗಳನ್ನು ಗಾಳಿಗೆ ತೂರಿ ಅಡ್ಡಾದಿಡ್ಡಿ ವಾಹನ ಚಲಾಯಿಸಲು ಮುಂದಾಗಿದ್ದು ಪಾದಚಾರಿ ರಸ್ತೆಯನ್ನು ಅಕ್ರಮಿಸುತ್ತಿರುವುದು ವಿಷಾದನೀಯ ಸಂಗತಿಯಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ

ಸಂಜೆ ಸಮಯದಲ್ಲಿ ಚಲಿಸುವ ಕಾರ್ಖಾನೆಗಳ ವಾಹನಗಳಿಗಂತು ಯಾವುದೇ ನಿಯಮವೇ ಇಲ್ಲ ಎಂಬಂತೆ ಸಾಗುತ್ತವೆ ಅತಿಯಾದ ವಾಹನ ದಟ್ಟಣೆ ಇರುವ ಈ ಪ್ರದೇಶದಲ್ಲಿ ಟ್ರಾಫಿಕ್ ಸಿಗ್ನಲ್ ಸರಿಪಡಿಸಿದೆ ಇರುವುದಕ್ಕೆ ಕಾರಣ ಏನೆಂಬುದು ತಿಳಿಯದಾಗಿದೆ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಟ್ರಾಫಿಕ್ ಸಿಗ್ನಲ್ ಸರಿಪಡಿಸಲು ಸಾರ್ವಜನಿಕರು ಮನವಿ ಮಾಡಿದ್ದಾರೆ

Comments

Leave a Reply

Your email address will not be published. Required fields are marked *