ಪದವೀಧರರಿಗೆ ಉದ್ಯೋಗಾವಕಾಶ ಕಲ್ಪಿಸುವುದೇ ನನ್ನ ಮುಖ್ಯ ಉದ್ದೇಶ – ಉದಯ್ ಸಿಂಗ್

ದೊಡ್ಡಬಳ್ಳಾಪುರ : ವಿಧಾನಪರಿಷತ್ತಿನ ಬೆಂಗಳೂರು ಪದವೀಧರರ ಕ್ಷೇತ್ರದ ಚುನಾವಣೆ ಮುಂದಿನ ವರ್ಷ 2024 ರ ಜೂನ್ ನಲ್ಲಿ ನಡೆಯಲಿದ್ದು ಈ ಸಂಬಂಧ ಮತದಾರರ ನೋಂದಣಿ ಕಾರ್ಯ ನಡೆದು ಕರಡು ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಸಿದ್ಧಪಡಿಸಿದೆ .ಮತದಾರರ ನೋಂದಣಿ ಪಟ್ಟಿ ಸೇರ್ಪಡೆಗೆ ಈವರೆಗೆ 67787 ಮಂದಿ ಪದವೀಧರರು ಸ್ವಯಂಪ್ರೇರಣೆಯಿಂದ ಅರ್ಜಿ ಸಲ್ಲಿಸಿ ತಮ್ಮ ಹೆಸರನ್ನು ನೊಂದಾಯಿಸಿಕೊಂಡಿದ್ದಾರೆ .ಎಂದು ಪದವೀಧರರ ಕ್ಷೇತ್ರದ ಅಭ್ಯರ್ಥಿ ಉದಯ್ ಸಿಂಗ್ ತಿಳಿಸಿದರು

 

ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲ್ಲೂಕಿನ ನಗರ ಭಾಗದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೋಷ್ಠಿಯಲ್ಲಿ ಪದವೀಧರಕ್ಷೇತ್ರದ ಅಭ್ಯರ್ಥಿ ಉದಯ್ ಸಿಂಗ್ ಮಾತನಾಡಿ ಪದವೀಧರ ಜ್ವಲಂತ ಸಮಸ್ಯೆಗಳಿಗೆ ಇಂದಿಗೂ ಪರಿಹಾರ ಕಂಡುಕೊಳ್ಳುವ ಕಾರ್ಯ ಆಗಿಲ್ಲ ಎಂಬುದಕ್ಕೆ ಈ ಕ್ಷೇತ್ರಗಳಿಂದ ಆಯ್ಕೆಯಾದವರ ಇಚ್ಛಾಶಕ್ತಿ ಕೊರತೆಯೇ ಕಾರಣ ಪದವೀಧರ ಮತ್ತು ಶಿಕ್ಷಕರ ಮೂಲಕ ಆಯ್ಕೆಯಾಗುವ ಪದವೀಧರ ಕ್ಷೇತ್ರದ ಪ್ರತಿನಿಧಿ ಮೇಲೆ ಅಪಾರವಾದ ಜವಾಬ್ದಾರಿಗಳಿದ್ದು , ಆಯ್ಕೆಯಾದ ಸದಸ್ಯರು ಸರ್ಕಾರದ ಮಟ್ಟದಲ್ಲಿ ಪದವೀಧರರ ಹಿತರಕ್ಷಣೆ ಕಾಯುವ ಜೊತೆಗೆ ಅವರ ಸಮಸ್ಯೆಗಳನ್ನು ,ಬೇಡಿಕೆಗಳನ್ನು ಈಡೇರಿಸುವ ಸರ್ಕಾರ ಮತ್ತು ತಾವು ಪ್ರತಿನಿಧಿಸುತ್ತಿರುವ ಸುಶಿಕ್ಷಿತ ವರ್ಗದ ನಡುವೆ ಸೇತುವೆಯಾಗಿ ಕೆಲಸ ಮಾಡಬೇಕಾಗಿರುತ್ತದೆ.ಪದವೀಧರರ ಪರ ನಿಲ್ಲಬೇಕೆಂಬ ದೃಷ್ಟಿಯಿಂದ ಈ ಚುನಾವಣೆಯನ್ನು ಒಂದು ಆಂದೋಲನದ ಮಾದರಿಯಲ್ಲಿ ನಡೆಸಬೇಕೆಂಬ ಗುರಿಯಿಟ್ಟುಕೊಂಡು ನಾನು ಕಣಕ್ಕಿಳಿಯುತ್ತಿದ್ದೇನೆ ಪದವೀಧರರು ಚುನಾವಣೆಯಲ್ಲಿ ಒಂದು ಅವಕಾಶ ನೀಡುವಂತೆ ಹಾಗೂ ಇಲ್ಲಿಯ ವರೆಗೂ ಮತದಾರರ ಪಟ್ಟಿಗೆ ಹೆಸರು ಸೇರ್ಪಡೆ ಮಾಡದ ಪದವಿಧರಿಗೆ ಕೂಡಲೇ ಅರ್ಜಿ ಸಲ್ಲಿಕೆ ಮಾಡಿ ಹೆಸರು ಸೇರಿಸಿಕೊಳ್ಳಿ ಎಂದು ಮನವಿ ಮಾಡಿದರು

Comments

Leave a Reply

Your email address will not be published. Required fields are marked *