ಸತ್ಯಾಂಶ ತಿಳಿಯದೆ ನನ್ನ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ – ಕಾಂಗ್ರೆಸ್ ಮುಖಂಡ ರುದ್ರಮೂರ್ತಿ

ಕೆಲ ಬಿಜೆಪಿ ನಾಯಕರ ಕುಮ್ಮಕ್ಕಿನಿಂದ ನನ್ನ ವಿರುದ್ಧ ಆರೋಪ ಮಾಡಿ ಗ್ರಾಮ ಪಂಚಾಯಿತಿ ಮುಂಭಾಗ ಪ್ರತಿಭಟನೆ ಮಾಡಲಾಗಿದೆ .ಮಾಡಿರುವ ಆರೋಪಗಳಲ್ಲಿ ಸತ್ಯಾಂಶವಿಲ್ಲ ಸತ್ಯ ಅರಿತು ನಂತರ ಅರೋಪಿಸಬೇಕಿತ್ತು ಎಂದು ಕರ್ನಾಟಕ ದಲಿತ ಸಂಘರ್ಷ ಸೇನೆ ವತಿಯಿಂದ ಸಕ್ಕರೆ ಗೊಲ್ಲಹಳ್ಳಿ ಗ್ರಾಮ ಪಂಚಾಯತಿ ಮುಂಭಾಗ ಹಮ್ಮಿಕೊಂಡಿದ್ದ ಪ್ರತಿಭಟನೆ ಕುರಿತು ಸ್ಥಳೀಯ ಕಾಂಗ್ರೆಸ್ ಮುಖಂಡ ರುದ್ರಮೂರ್ತಿ ತಿಳಿಸಿದರು

 

ನವೆಂಬರ್ 29 ರಂದು ದೊಡ್ಡಬಳ್ಳಾಪುರ ತಾಲ್ಲೂಕಿನ ಸಕ್ಕರೆ ಗೊಲ್ಲಹಳ್ಳಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಬೂಚನಹಳ್ಳಿ ಗ್ರಾಮಕ್ಕೆ ಸೇರಿರುವ ಗ್ರಾಮಠಾಣಾ ಸ್ಥಳವನ್ನು ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಕ್ರಮವಾಗಿ ಅತಿಕ್ರಮ ಪ್ರವೇಶ ಮಾಡಲಾಗಿದೆ ಎಂಬ ಆರೋಪ ಒಳಗೊಂಡಂತೆ ಹಲವು ಆರೋಪಗಳನ್ನು ಮಾಜಿ ಗ್ರಾಮ ಪಂಚಾಯಿತಿ ಅಧ್ಯಕ್ಷರ ಪತಿ ರುದ್ರಮೂರ್ತಿ ಹಾಗೂ ಪಿಡಿಓ ಮುನಿರಾಜು ವಿರುದ್ಧ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಘಟನಾ ಸಂಚಾಲಕ ಬಸವರಾಜ್ ಸ್ಥಳೀಯ ಗ್ರಾಮಸ್ಥರ ಸಹಯೋಗದೊಂದಿಗೆ ಬೃಹತ್ ಪ್ರತಿಭಟನೆ ನಡೆಸಿ ಆರೋಪಿಸಿದ್ದರು

 

ಪ್ರತಿಭಟನೆ ಕುರಿತಂತೆ ಪ್ರತಿಕ್ರಿಯೆ ನೀಡಿರುವ ರುದ್ರಮೂರ್ತಿ ಪ್ರತಿಭಟನೆ ಪೂರ್ವ ನಿಯೋಜಿತವಾಗಿದ್ದು ಬೇಕಂತಲೇ ನನ್ನ ವಿರುದ್ಧ ಆರೋಪಗಳನ್ನು ಮಾಡಿದ್ದಾರೆ . ಆರೋಪಿಸಿರುವ ಬೂಚನಹಳ್ಳಿ ಸ್ಥಳವು ಲಿಂಗಯ್ಯ ಮತ್ತು ಮುನಿಮುತ್ತಯ್ಯ ಎಂಬುವರ ಹೆಸರಿನಲ್ಲಿದೆ .ಪ್ರತಿಭಟನಾಕಾರರ ಬಳಿ ನಿಖರ ದಾಖಲಾತಿಗಳಿಲ್ಲದೆ ನನ್ನ ವಿರುದ್ಧ ಅಪಪ್ರಚಾರ ಮಾಡುತ್ತಿದ್ದಾರೆ . ಮಣ್ಣು ಮಾರಿಕೊಂಡು ಜೀವನ ನಡೆಸುವ ಸ್ಥಿತಿ ನಮಗಿನ್ನೂ ಬಂದಿಲ್ಲ ನಾನು ಚಿಕ್ಕಕಾಳೆನಹಳ್ಳಿ ಕೆರೆಯ ಮಣ್ಣನ್ನು ಯಾರಿಗೂ ಮಾರಾಟ ಮಾಡಿಲ್ಲ ಈ ಕುರಿತು ಸಾಕ್ಷಾಧಾರಗಳಿದ್ದಲ್ಲಿ ನೀಡಲಿ ಎಂದರು ಗ್ರಾಮ ಪಂಚಾಯಿತಿ ಅಭಿವೃದ್ಧಿಗಾಗಿ ಬಿಬಿಎಂಪಿ ಯಿಂದ ಬಿಡುಗಡೆಯಾಗಿದ್ದ ಅನುದಾನದಲ್ಲಿ 17 ಲಕ್ಷ ರೂಪಾಯಿ ಹಣ ಗ್ರಾಮ ಪಂಚಾಯಿತಿ ಖಾತೆಯಲ್ಲಿ ಇತ್ತು.ಅದು ಈಗ ಏನಾಗಿದೆ . ಗ್ರಾಮ ಪಂಚಾಯಿತಿಯ ಯಾವ ಅಭಿವೃದ್ಧಿಗೆ ಅನುದಾನಗಳನ್ನು ಬಳಸಿಕೊಂಡಿದ್ದಾರೆ ಎಂದು ಪ್ರಶ್ನೆ ಮಾಡಿದರು. ಕೋನೇನಹಳ್ಳಿ ಗಾಣಗಪ್ಪನ ಕಟ್ಟೆ ದುರಸ್ತಿಗೆ ಕ್ರಿಯಾ ಯೋಜನೆಯಲ್ಲಿ 50ಸಾವಿರ ಆಗಿದ್ದು ಇನ್ನೂ ಬಿಲ್ ಸಹ ಆಗಿರುವುದಿಲ್ಲ ಈ ವಿಚಾರವಾಗಿ 10 ಲಕ್ಷ ಎಂದು ಆರೋಪಿಸಿದ್ದಾರೆ ..

ನಮ್ಮಿಂದ ಪಂಚಾಯಿತಿಗೆ ಯಾವುದೇ ಮೋಸ ಆಗಿಲ್ಲ ಸುಖಾಸುಮ್ಮನೆ ನಮ್ಮ ಮೇಲೆ ಆರೋಪ ವೆಸಗುವುದು ಸರಿಯಲ್ಲ ಮೊದಲು ಸತ್ಯಂಶ ತಿಳಿಯಲಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು

Comments

Leave a Reply

Your email address will not be published. Required fields are marked *