ಗ್ರಾಮ ಪಂಚಾಯಿತಿ ಹಣ ದುರ್ಬಳಕೆ : ಹೊನ್ನಾವರ ಪಿಡಿಓ ಶಶಿದರ್ ಅಮಾನತ್ತು.

ಬೆಂಗಳೂರು ಗ್ರಾಮಾಂತರ ಜಿಲ್ಲೆ : ನೆಲಮಂಗಲ ಮೂಲದ ಪಿಡಿಓ ಶಶಿದರ್ ರವರು ಪ್ರಸ್ತುತ ದೊಡ್ಡಬಳ್ಳಾಪುರ ಹೊನ್ನಾವರ ಗ್ರಾಮ ಪಂಚಾಯಿತಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದು ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಆರೋಪದಲ್ಲಿ ಶಿಸ್ತು ಕ್ರಮಕ್ಕೆ ಗುರಿಯಾಗಿ ಅಮಾನತ್ತು ಗೊಂಡಿದ್ದಾರೆ.

ಇನ್ನೂ ನೆಲಮಂಗಲ ತಾಲ್ಲೂಕಿನ ಟಿ.ಬೇಗೂರು ಗ್ರಾಮಪಂಚಾಯಿತಿಯಲ್ಲಿ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಆರೋಪಕೂಡ ಇವರ ಮೇಲಿದ್ದು ಸಾಮಾಜಿಕ ಹೋರಾಟಗಾರ ಗಂಗಾಧರ್ ಟಿ ಜಿ ರವರು ನೀಡಿದ್ದ ದೂರನ್ನು ಆದರಿಸಿ ಪಿಡಿಓ ಶಶಿಧರ್ ಗ್ರಾಮ ಪಂಚಾಯಿತಿ ಹಣ ದುರ್ಬಳಕೆ ಮಾಡಿರುವುದು ಕಂಡು ಬಂದಿರುವುದಾಗಿ ಗ್ರಾಮೀಣಾಭಿರುದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಅಧಿಕಾರಿಗಳು ನಡೆಸಿರುವ ತನಿಖೆಯಿಂದ ದೃಢಪಟ್ಟಿದೆ.ಹಾಗೂ ದೇವನಹಳ್ಳಿ ತಾಲ್ಲೂಕಿನ ಅಣ್ಣೆಶ್ವರ ಗ್ರಾಮ ಪಂಚಾಯಿತಿಯಲ್ಲಿಯೂ ಸಹ ಪಿಡಿಓ ಶಶಿದರ್ ಲಕ್ಷಾಂತರ ರೂಪಾಯಿ ಸರ್ಕಾರದ ಹಣ ದುರುಪಯೋಗ ಮಾಡಿರುವ ಬಗ್ಗೆ ತನಿಖೆಯಿಂದ ದೃಢ ಪಟ್ಟ ಹಿನ್ನೆಲೆ ಪಿಡಿಓ ಶಶಿದರ್ ರವರನ್ನು ದಿನಾಂಕ:- 29-02-2024 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಸಿಇಓ ಡಾ. ಅನುರಾಧರವರು ಅಮಾನತ್ತು ಗೊಳಿಸಿ ಆದೇಶ ಮಾಡಿದ್ದಾರೆ .

 

ಈ ಹಿಂದೆಯೂ ಕೂಡ ಪಿಡಿಓ ಶಶಿಧರ್ ರವರು ದೊಡ್ಡಬಳ್ಳಾಪುರ ತಾಲ್ಲೂಕಿನ ಬಾಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿಯಲ್ಲಿ 203 ನಕಲಿ ಖಾತೆ ಮಾಡಿ ಸರ್ಕಾರಕ್ಕೆ ಬರಬೇಕಿದ್ದ ಕೋಟಿ ಗಟ್ಟಲೆ ಹಣವನ್ನು ಸರ್ಕಾರಕ್ಕೆ ವಂಚಿಸಿ ದುರುಪಯೋಗ ಮಾಡಿದ್ದ ಬಗ್ಗೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಪ್ರಕರಣವನ್ನು ಹಿರಿಯ ಅಧಿಕಾರಿಗಳು ಪಿಡಿಓ ಶಶಿಧರ್ ವಿರುದ್ಧ ದಾಖಲಿಸಿದ್ರು ಸಧ್ಯ ಈ ಪ್ರಕರಣದಲ್ಲಿ ಪಿಡಿಓ ಶಶಿಧರ್ ಜಾಮೀನು ಪಡೆದಿದ್ರು ಎಂಬ ಮಾಹಿತಿ ಲಭ್ಯವಾಗಿದೆ .

Comments

Leave a Reply

Your email address will not be published. Required fields are marked *