*ವಿವಿಧೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24ರ ವಾರ್ಷಿಕ ಸಭೆ*

ದೊಡ್ಡಬಳ್ಳಾಪುರ ಆಗಸ್ಟ್ 02 ( ವಿಜಯಮಿತ್ರ) : ತಾಲ್ಲೂಕಿನ ತೂಬಗೆರೆ ಸಮುದಾಯದ ಭವನದಲ್ಲಿ ವಿವಿದೋದ್ದೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ 2023-24 ರ ವಾರ್ಷಿಕ ಸಭೆ ಅಧ್ಯಕ್ಷ ಕೆ.ಬಿ.ನಾಗರಾಜು ಸಮ್ಮುಖದಲ್ಲಿ ನಡೆಯಿತು,

 

ಕಾರ್ಯಕ್ರಮದ ಪ್ರಾರಂಭವಾಗುತ್ತಿದ್ದಂತೆ ಮೊದಲು ಮಕ್ಕಳು ದೇವರ ಪ್ರಾರ್ಥನೆ ಮಾಡಿ ನಂತರ ಮುಖ್ಯಕಾರ್ಯನಿರ್ವಹಣಾಧಿಕಾರಿ ಎ. ಜಗದೀಶ್ ವಾರ್ಷಿಕ ಸಭೆ ಮಂಡಿಸಿ ಸಂಘಕ್ಕೆ 3 ಲಕ್ಷ 23 ಸಾವಿರ ಲಾಭ ಗಳಿಸಿದೆ ಎಂದು ಹೇಳಿದರು,

 

ವಾರ್ಷಿಕ ಸಭೆಯ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಎನ್ ಅರವಿಂದ್ ಉದ್ಘಾಟಿಸಿ ಮಾತನಾಡಿ,

ಕರ್ನಾಟಕದಲ್ಲಿ ಸಹಕಾರಿ ಸಂಘಗಳಿಗೆ ಹೆಚ್ಚು ಪ್ರಾಮುಖ್ಯತೆ ಹಿಂದಿನಿಂದಲೂ ನಡೆದುಕೊಂಡು ಬಂದಿದೆ, ಅದನ್ನು ಉಳಿಸಿಕೊಡು ಹೋಗುವ ಜವಾಬ್ದಾರಿ ಸಹಕಾರಿ ಸಂಘದ ಸದಸ್ಯರ ಮೇಲಿದೆ, ಸಾಲಗಳ ಮರುಪಾವತಿಯನ್ನು ಸಕಾಲದಲ್ಲಿ ಮಾಡಿದರೆ ಇನ್ನೂ ಹೆಚ್ಚಿನ ಜನ ಅನುಕೂಲ ಪಡೆಯಬಹುದಾಗಿದೆ, ಹಾಗೂ ಸಂಘಗಳು ಅಭಿವೃದ್ಧಿ ಹೊಂದಬೇಕಾದರೆ ಪ್ರತಿ ಮನೆಗೆ ಭೇಟಿ ನೀಡಿ ನಮ್ಮ ಸಂಘದಿಂದ ಸಾಲ ನೀಡುತ್ತಿದ್ದೇವೆ ತೆಗೆದುಕೊಳ್ಳಿ ಎಂದು ಹೇಳಿ ಬಂದರೆ ರೈತರು ಸಾಲವನ್ನು ಪಡೆಯುತ್ತಾರೆ, ಹೆಚ್ಚು ರೈತರು ಸಾಲ ಪಡೆದರೆ ಸಂಘ ಬೆಳೆಯುತ್ತದೆ ಒಳ್ಳೆಯ ಲಾಭ ಬರುತ್ತದೆ ಎಂದು ಮುಖ್ಯಕಾರ್ಯನಿರ್ವಹಣಾಧಿಕಾರಿಗೆ ಮನವಿ ಮಾಡಿದರು,

 

ದೊಡ್ಡಬಳ್ಳಾಪುರ ಬಿ.ಡಿ.ಸಿ.ಸಿ ಹಾಗು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಚುಂಚೇಗೌಡ ಮಾತನಾಡಿ ಸಹಕಾರಿ ಸಂಸ್ಥೆಗಳು ನಮ್ಮ ರೈತರ ಬೆನ್ನಲುಬು, ಅವುಗಳಿಂದ ರೈತರಿಗೆ ಹಲವು ಅನುಕೂಳಾಗುತ್ತಿವೆ, ಇನ್ನು ಬಿ.ಡಿ.ಸಿ.ಸಿ ಬ್ಯಾಂಕಿನಿಂದ ಮನೆ ಸಾಲ ಕುರಿ ಸಾಲ ಇನ್ನು ಮುಂತಾದವುಗಳ ಮೇಲೆ ರೈತರಿಗೆ ಸಾಲ ನೀಡುತ್ತಿದ್ದೇವೆ, ಹೆಚ್ಚು ಹೆಚ್ಚು ಬ್ಯಾಂಕಿಗೆ ಭೇಟಿ ನೀಡಿ ಸಾಲಗಳನ್ನು ಪಡೆದುಕೊಳ್ಳಿ, ಬ್ಯಾಂಕಿನಿಂದ ಸಾಲ ಪಡೆದ ರೈತರು ಸಕಾಲಕ್ಕೆ ಮರುಪಾವತಿ ಮಾಡಿ ಎಂದು ಹೇಳಿದರು,

 

ಕಾರ್ಯಕ್ರಮದಲ್ಲಿ ಸಂಘದ ಉಪಾಧ್ಯಕ್ಷ ಟಿ.ವಿ.ಕೃಷ್ಣಪ್ಪ, ಕೆಪಿಸಿಸಿ ಸದಸ್ಯ ಎಸ್.ಆರ್.ಮುನಿರಾಜು, ಬಿಡಿಸಿಸಿ ಬ್ಯಾಂಕ್ ಮೇಲ್ವಿಚಾರಕ ರಂಗಪ್ಪ ಆರ್ ನಾಯ್ಕ್, ಸಂಘದ ಮಾಜಿ ಅಧ್ಯಕ್ಷ ಮುನಿರಾಜಪ್ಪ, ಮಾಜಿ ಉಪತಹಶೀಲ್ದಾರ್ ವೆಂಕಟರಮಣಪ್ಪ, ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ವೆಂಕಟಪ್ಪ, ತೂಬಗೆರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಟಿ.ವಿ.ವೆಂಕಟೇಶ್, ಸದಸ್ಯ ಮುನಿಕೃಷ್ಣಪ್ಪ, ಸಂಘದ ನಿರ್ದೇಶಕಿ ನಾಗರತ್ನ, ಅನ್ನಪೂರ್ಣಮ್ಮ, ಮುತ್ತಮ್ಮ ಹಾಗೂ ರೈತರು ಹಾಜರಿದ್ದರು.

Comments

Leave a Reply

Your email address will not be published. Required fields are marked *