ನೇಕಾರಿಕೆ ಅಭಿವೃದ್ದಿಗೆ ಒತ್ತು ನೀಡಿ : ನೇಕಾರರನ್ನು ಉಳಿಸಿ – ಹರೀಶ್ ಗೌಡ

ದೊಡ್ಡಬಳ್ಳಾಪುರ : ನೇಕಾರಿಕೆಯನ್ನು ನಂಬಿಕೊಂಡು ಜೀವನ ಸಾಗಿಸುತ್ತಿರುವ ನೂರಾರು ಕುಟುಂಬಗಳಿಗೆ ಸರ್ಕಾರ ಉತ್ತಮ ಮಾರುಕಟ್ಟೆ ರೂಪಿಸುವ ಮೂಲಕ ನೇಕಾರರಿಗೆ ಇರುವ ಸಮಸ್ಯೆಗಳ ಪರಿಹಾರಕ್ಕೆ ಮುಂದಾಗಲಿ ಎಂದು ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹರೀಶ್ ಗೌಡ ತಿಳಿಸಿದ್ದಾರೆ.

Ad

ನಗರದ ಕರೇನಹಳ್ಳಿಯ ಶ್ರೀ ಪಾರ್ವತಿ ಪುತ್ರ ವಿನಾಯಕ ಗೆಳೆಯರ ಬಳಗ ಇವರ ವತಿಯಿಂದ ಆಯೋಜಿಸಲಾಗಿದ್ದ ಗಣೇಶನ ಪೂಜಾ ಕಾರ್ಯಕ್ರಮದಲ್ಲಿ ಮುಖಂಡರೊಂದಿಗೆ ಭಾಗವಹಿಸಿ ಮಾತನಾಡಿದರು ನಾಡಿನ ಹಾಗೂ ತಾಲ್ಲೂಕಿನ ಎಲ್ಲಾ ಸಮಸ್ತ ನಾಗರಿಕರಿಗೆ ಒಳ್ಳೆ ಆರೋಗ್ಯ ಭಾಗ್ಯ ವೃದ್ಧಿಸಲಿ ಎಲ್ಲರಿಗೂ ಒಳ್ಳೆಯದಾಗಲಿ, ಗಣೇಶ ಪೂಜೆಯು ಸಮುದಾಯವನ್ನು ಒಗ್ಗೂಡಿಸುವ ಸಂಕೇತವಾಗಿದೆ, ಪೂಜಾ ಕಾರ್ಯದಲ್ಲಿ ಪಾಲ್ಗೊಳ್ಳಲು ಅವಕಾಶ ಮಾಡಿಕೊಟ್ಟ ಪ್ರತಿಯೊಬ್ಬರಿಗೂ ಧನ್ಯವಾದಗಳು ಅರ್ಪಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮಾಜಿ ನಗರ ಸಭಾ ಅಧ್ಯಕ್ಷರು ತ.ನಾ. ಪ್ರಭುದೇವ ನಗರ ಸಭಾ ಉಪಾಧ್ಯಕ್ಷ ರೈಲ್ವೆ ಸ್ಟೇಷನ್ ಮಲ್ಲೇಶ್ ನಗರ ಸಭಾ ಸದಸ್ಯರು ಪ್ರಭಾ ನಾಗರಾಜು ಗ್ರಾಮಾಂತರ ಉಪ ನಿರೀಕ್ಷಕರು ಪಂಕಜ,ಆನಂದ ಶಾಸ್ತ್ರಿಗಳು.ನೇಕಾರರ ಹೋರಾಟ ಸಮಿತಿ ಅಧ್ಯಕ್ಷರು ವೆಂಕಟೇಶ್,ಜೆಡಿಎಸ್ ಮುಖಂಡರುಗಳಾದ ನಾಗಣ್ಣ, ಪ್ರವೀಣ್ ಶಾಂತಿನಗರ,ಕೇಶವಮೂರ್ತಿ, ಸಂಜೀವ,ಇಫ್ತಿಯರ್ ಅಹ್ಮದ್,ವೈರ್ ಶಿವು,ಕೋದಂಡರಾಮ,ಮಲ್ಲೇಶ್ ಕರೇನಹಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

Comments

Leave a Reply

Your email address will not be published. Required fields are marked *