ಇದು ಕಾಂಗ್ರೆಸ್ ಹೋರಾಟವಲ್ಲ, ಜನಸಾಮಾನ್ಯರ ಹೋರಾಟ – ರವಿ ಸಿದ್ದಪ್ಪ

ದೊಡ್ಡಬಳ್ಳಾಪುರ : ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಬಿಜೆಪಿಯ ಜನಕ್ರೋಶ ಯಾತ್ರೆ ಹಾಗೂ ಕೇಂದ್ರ ಸರ್ಕಾರದ ಬೆಲೆ ಏರಿಕೆ ವಿರುದ್ಧ ರಾಜ್ಯ ಕಾಂಗ್ರೆಸ್ ನೆಡೆಸುತ್ತಿರುವ ಹೋರಾಟದಲ್ಲಿ ತಾಲ್ಲೂಕಿನ ಸಾವಿರಾರು ಕಾರ್ಯಕರ್ತರು ಭಾಗವಹಿಸಲಿದ್ದಾರೆ ಎಂದು ತೂಬಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರವಿ ಸಿದ್ದಪ್ಪ ತಿಳಿಸಿದರು.

ಪ್ರತಿಭಟನೆಗೆ ಹೊರಡುವ ಮುನ್ನ ನಗರದ ಪ್ರವಾಸಿ ಮಂದಿರ ಮುಂಭಾಗ ಮಧ್ಯಮಗಳೊಂದಿಗೆ ಮಾತನಾಡಿದ ಅವರು ಕಾಂಗ್ರೆಸ್ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿರಾಜ್ಯ ಸುಳ್ಳುಗಳನ್ನು ಹೇಳುತ್ತಾ ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ ಕೆಲವು ಅನಿವಾರ್ಯತೆಗಳಿಂದಾಗಿ ರಾಜ್ಯ ಸರ್ಕಾರ ಬೆಲೆ ಏರಿಕೆ ಮಾಡಿರುವುದನ್ನು ಬೃಹದಾಕಾರವಾಗಿ ಬಿಂಬಿಸಿ ಯಾತ್ರೆ ಹೆಸರಿನಲ್ಲಿ ರಾಜ್ಯದ ಜನತೆಗೆ ತಪ್ಪು ಸಂದೇಶ ನೀಡುತ್ತಿದ್ದಾರೆ ಎಂದರು

 

ಇಂದು ನಮ್ಮ ತಾಲ್ಲೂಕಿನಿಂದ ರಾಜ್ಯ ಕಾಂಗ್ರೆಸ್ ನೆಡೆಸುತ್ತಿರುವ ಪ್ರತಿಭಟನೆಯಲ್ಲಿ ಭಾಗವಹಿಸುವ ಸಲುವಾಗಿ ಸಾವಿರಾರು ಕಾರ್ಯಕರ್ತರು, ಪಕ್ಷದ ಪದಾಧಿಕಾರಿಗಳು, ಸಾರ್ವಜನಿಕರು ತೆರಳುತ್ತಿದ್ದವೆ, ಮುಖ್ಯಮಂತ್ರಿ ಸಿದ್ದರಾಮಯ್ಯನವರ ಜನಪರ ಆಡಳಿತ ಸಹಿಸಲಾಗದ ಬಿಜೆಪಿ ಉನ್ನರಕ್ಕೆ ತಕ್ಕ ಉತ್ತರ ನೀಡಲಿದ್ದೇವೆ ಎಂದರು

 

ಶ್ರೀ ಕ್ಷೇತ್ರ ಘಾಟಿಸುಬ್ರಮಣ್ಯ ಪ್ರಾಧಿಕಾರದ ಸದಸ್ಯ ಹಾಗೂ ಸ್ಥಳೀಯ ಕಾಂಗ್ರೆಸ್ ಮುಖಂಡ ರಂಗಪ್ಪ ಮಾತನಾಡಿ ಈ ಹೋರಾಟವು ಕೇವಲ ಪಕ್ಷದ ಹೋರಾಟವಾಗಿ ಉಳಿಯದೆ ರಾಜ್ಯದ ಜನತೆ ಪಾಲ್ಗೊಳ್ಳುವ ಮೂಲಕ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ ನವರ ಸರ್ಕಾರ ಜನಪರವಾಗಿದೆ ಎಂಬುದನ್ನು ಸಾಕ್ಷಿಯಾಗಿಸಿದೆ, ಬಿಜೆಪಿಪಕ್ಷದ ಸುಳ್ಳು ಆರೋಪಗಳಿಗೆ ಉತ್ತರವನ್ನು ಪ್ರತಿಭಟನೆಮೂಲಕ ನೀಡಲಾಗುವುದು ಎಂದರು.

 

 

ಬೆಂಗಳೂರು ಗ್ರಾಮಾಂತರ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷರಾದ ರೇವತಿ ಅನಂತ ರಾಮ್ ಮಾತನಾಡಿ ಇಂದಿನ ಹೋರಾಟಕ್ಕೆ ರಾಜ್ಯದ ಮೂಲೆ ಮೂಲೆಗಳಿಂದ ಮಹಿಳಾ ಶಕ್ತಿ ಹರಿದು ಬರುತ್ತಿದ್ದು, ಬಿಜೆಪಿ ಸುಳ್ಳು ಆರೋಪಗಳನ್ನು ಹಾಗೂ ಕೇಂದ್ರದ ದೋರಣೆ ವಿರುದ್ಧ ಪ್ರತಿಭಟನೆ ಮಾಡಲಿದ್ದೇವೆ, ರಾಜ್ಯ ಬಿಜೆಪಿಗೆ ಇದೊಂದು ಪಾಠವಾಗಲಿದೆ ಎಂದರು.

ಹೋರಾಟದಲ್ಲಿ ಮುಖಂಡರಾದ ವೆಂಕಟೇಶ್ (ಅಪ್ಪಿ ), ಲಕ್ಷ್ಮ ನಾಯಕ್, ಹಾಡೋನಹಳ್ಳಿ ಸವಿತಾ ತಾ ಕೃಷಿ ಸಮಾಜದ ಅಧ್ಯಕ್ಷ ಮುರಳಿಧರ್,ತೂಬಗೆರೆ ಬ್ಲಾಕ್ ಕಾಂಗ್ರೇಸ್ ಮಹಿಳಾ ಅಧ್ಯಕ್ಷೆ ಕಾಂತಮ್ಮ, ಪಿ ಐ ಎಲ್ ಡಿ ಬ್ಯಾಂಕ್ ನಿರ್ದೇಶಕಿ ಶೋಭಾ, ದೊಡ್ಡ ತಿಮ್ಮನ ಹಳ್ಳಿ ಅಶ್ವತ್ಥಪ್ಪ,ಚಿಕ್ಕ ಮುದ್ದೇನಹಳಿ ನಾರಯಣಪ್ಪ ಹಾಗೂ ತಾಲ್ಲೂಕಿನ ಕಾಂಗ್ರೇಸ್ ಕಾರ್ಯಕರ್ತರು ಭಾಗವಹಿಸಿದ್ದರು

 

Comments

Leave a Reply

Your email address will not be published. Required fields are marked *