ತೂಬಗೆರೆ : ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂಪಾಯಿಗಳ ಅನುದಾನ

ದೊಡ್ಡಬಳ್ಳಾಪುರ : ತೂಬಗೆರೆ ಹೋಬಳಿ ಹಾಡೋನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನೆಲ್ಲುಗುದಿಗೆ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಒಂದು ಲಕ್ಷ ರೂಗಳ ಡಿ ಡಿ ಯನ್ನು ಯೋಜನೆಯ ಜಿಲ್ಲಾ ನಿರ್ದೇಶಕರಾದ ಉಮಾರಬ್ಬ ವಿತರಣೆ ಮಾಡಿದರು.

ಅವರು ಮಾತನಾಡಿ ಗ್ರಾಮದ ದೇವಾಲಯದ ಅಭಿವೃದ್ದಿಗಾಗಿ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಶ್ರೀ ವೀರೇಂದ್ರ ಹೆಗಡೆಯವರ ಮಾರ್ಗದರ್ಶನದಲ್ಲಿ ಹಲವಾರು ಯೋಜನೆಗಳ ಮೂಲಕ ಅಂಗನವಾಡಿ ಕಟ್ಟಡ ನಿರ್ಮಾಣ,ಹಾಲಿನ ಡೇರಿ ಸ್ಥಾಪನೆ, ಟೈಲರಿಂಗ್ ತರಬೇತಿ,ವಾತ್ಸಲ್ಯ ಯೋಜನೆಯಡಿ ಗೃಹ ನಿರ್ಮಾಣ, ಕೃಷಿಗಾಗಿ ಅನುದಾನ, ಕೆರೆಗಳ ಪುನಶ್ಚೇತನ,ಶುದ್ದ ನೀರಿನ ಘಟಕ ಸ್ಥಾಪನೆ,ಸ್ತ್ರೀ ಶಕ್ತಿ ಸಂಘಗಳಿಗೆ ಸಾಲದ ವ್ಯವಸ್ಥೆ ಹೀಗೆ ಹತ್ತಾರು ವಿಶೇಷ ಕಾರ್ಯಗಳನ್ನು ಸಮಾಜದ ಅಭಿವೃದ್ಧಿಗಾಗಿ ಮಾಡಲಾಗುತ್ತಿದೆ ಅಂತೆಯೇ ಇಂದು ನೆಲ್ಲುಗುದಿಗೆ ಗ್ರಾಮದ ಶ್ರೀ ಆಂಜಿನೇಯ ಸ್ವಾಮಿಯ ದೇವಾಲಯದ ಜೀರ್ಣೋದ್ಧಾರಕ್ಕಾಗಿ 1ಲಕ್ಷ ರೂಗಳ ಚೆಕ್ ವಿತರಣೆ ಮಾಡಿದ್ದೇವೆ ಎಂದರು

Ad

 

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ತಾಲೂಕಿನ ಯೋಜನಾಧಿಕಾರಿ ದಿನೇಶ್ ಪ್ರಾಸ್ತಾವಿಕ ಮಾಹಿತಿ ನೀಡಿದರು

 

ಈ ಕಾರ್ಯಕ್ರಮದಲ್ಲಿ. ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಗೌರವಾಧ್ಯಕ್ಷ ಪಿಳ್ಳಪ್ಪ ಕಾರ್ಯನಿರತ ಪತ್ರ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಹಾಗು ಶ್ರೀ ಆಂಜಿನೇಯ ಸ್ವಾಮಿ ದೇವಾಲಯ ಅಭಿವೃದ್ಧಿ ಟ್ರಸ್ಟಿನ ಕಾರ್ಯದರ್ಶಿ ನೆಲ್ಲುಗುದಿಗೆ ಚಂದ್ರು

ದೇವಾಲಯ ಸಮಿತಿ ಉಪಾಧ್ಯಕ್ಷರು ಹಾಗೂ ಗ್ರಾಮ ಪಂಚಾಯತ್ ಸದಸ್ಯ ಮುನಿರಾಜು, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಸಮಿತಿ ಖಜಾಂಚಿ ಮಂಜುನಾಥ್,ನಿರ್ದೇಶಕರಾದ ಆನಂದ್ ಆರ್ಚಕ ರಾಮಾನುಜ ಚಾರ್ಯ ಗೆದ್ದಲಹಳ್ಳಿ ಒಕ್ಕೂಟದ ಅಧ್ಯಕ್ಷರಾದ ಧನಂಜಯ್ ,ತಾಲೂಕಿನ ಕೃಷಿ ಮೇಲ್ವಿಚಾರಕರಾದ ಲೋಹಿತ್ ಗೌಡ, ಒಕ್ಕೂಟದ ಪದಾಧಿಕಾರಿಗಳು ಊರಿನ ಗ್ರಾಮಸ್ಥರು ಟಿ ಎಂ ಸಿದ್ದಪ್ಪ, ಕೆ ಸಿದ್ದಪ್ಪ, ಎಂ ಸಿದ್ದಪ್ಪ, ಬೀರಪ್ಪ, ಗಂಗಾಧರ ಹಾಗು ಸಂಘದ ಸದಸ್ಯರು, ಸೇವಾ ಪ್ರತಿನಿಧಿಗಳಾದ ರಿಜ್ವಾನ್,ಭಾರತಿ. ವಿ ಎಲ್ ಐ ಇ ಮಂಜುಳ, ಶೃತಿ ಸೇರಿದಂತೆ ಹಲವರು ಹಾಜರಿದ್ದರು.

Comments

Leave a Reply

Your email address will not be published. Required fields are marked *