ಹೋಟೆಲ್ ನಿರ್ಮಾಣಕ್ಕಾಗಿ ತಂದಿಟ್ಟಿದ್ದ 2 ಟನ್ ಕಬ್ಬಿಣ ಕದ್ದು ರಾತ್ರೋರಾತ್ರಿ ಪರಾರಿಯಾದ ಚಾಲಾಕಿ ಕಳ್ಳರು

ದೊಡ್ಡಬಳ್ಳಾಪುರ : ನಗರದ ಜಾಲಪ್ಪ ಕಾಲೇಜ್ ಹಿಂಭಾಗದ ಉಪನಗರ ಹೊರ ವರ್ತುಲ ರಸ್ತೆ (STRR )ಸ್ಯಾಟಲೈಟ್ ಟೌನ್ ರಿಂಗ್ ರೋಡ್ ಸಮೀಪ ನಿರ್ಮಾಣ ಹಂತದ ಕಟ್ಟಡದಲ್ಲಿ ಸುಮಾರು 2 ಟನ್ ಗೂ ಅಧಿಕ ಕಬ್ಬಿಣವನ್ನು ನೆನ್ನೆ ರಾತ್ರಿ ಕಳವು ಮಾಡಿ ಚಾಲಾಕಿ ಕಳ್ಳರು ಪರಾರಿಯಾಗಿದ್ದಾರೆ.

ತಾಲ್ಲೂಕಿನ ಕಕ್ಕೇಹಳ್ಳಿ ಸಮೀಪದ ಹೈವೆಯಲ್ಲಿ ಶ್ರೀ ಘಾಟಿ ಸುಬ್ರಮಣ್ಯ ಹೆಸರಿನ ನೂತನ ಹೋಟೆಲ್ ನಿರ್ಮಾಣ ಮಾಡುತ್ತಿದ್ದು, ನೆನ್ನೆ (ಜು. 25)ರಾತ್ರಿ ಸಿಸಿಟಿವಿ ಹೊಡೆದುಹಾಕಿ ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ಸುಮಾರು 2ಕ್ಕೂ ಅಧಿಕ ಕಬ್ಬಿಣ, ಸೆಂಟ್ರಿಂಗ್ ಕೆಲಸಕ್ಕೆ ಸಂಬಂಧಿಸಿದ ಕಬ್ಬಿಣದ ವಸ್ತುಗಳನ್ನು ಕಳವು ಮಾಡಲಾಗಿದೆ.

ಈ ಕುರಿತು ಮಾಲೀಕರಾದ ಮಹದೇವ್ ಮಾತನಾಡಿ ನೆನ್ನೆ ರಾತ್ರಿ 12ಗಂಟೆಯವರೆಗೂ ಸಿಸಿಟಿವಿಯಲ್ಲಿ ಸ್ಥಳ ವೀಕ್ಷಣೆ ಮಾಡಿದ್ದೆ, ಬೆಳ್ಳಿಗೆ ಕಾರ್ಮಿಕರು ಕರೆ ಮಾಡಿ ಕಳುವಾಗಿದೆ ಎಂಬ ಮಾಹಿತಿ ನೀಡಿದರು.ಸ್ಥಳಕ್ಕೆ ಬಂದು ನೋಡಿದಾಗ ಕಟ್ಟಡ ನಿರ್ಮಾಣಕ್ಕಾಗಿ ಇರಿಸಿದ್ದ ಕಬ್ಬಿಣ ಕದ್ದು ಹೋಗಿದ್ದಾರೆ. ಅಲ್ಲದೇ ಕಟ್ಟಡ ನಿರ್ಮಾಣಕ್ಕೆ ಬಳಸುತ್ತಿದ್ದ ವಸ್ತುಗಳನ್ನು ಕಳವು ಮಾಡಿದ್ದಾರೆ. ಮುಖ್ಯ ಹೆದ್ದಾರಿಯಲ್ಲೇ ಈ ರೀತಿ ಕಳ್ಳತನವಾಗಿರುವುದು ಆತಂಕಕ್ಕೆ ಎಡೆಮಾಡಿಕೊಟ್ಟಿದೆ ಎಂದರು.

ಕಟ್ಟಡ ನಿರ್ಮಾಣದ ಕೊಂಟ್ರಾಕ್ಟರ್ ಲೋಹಿತ್ ಮಾತನಾಡಿ ನೆನ್ನೆ ಸಂಜೆ ಸುಮಾರು 6ಗಂಟೆ ವರೆಗೂ ಕೆಲಸ ಮಾಡಿ ಮಳೆ ಬಂದ ಕಾರಣ ಕೆಲಸ ನಿಲ್ಲಿಸಿ ಮನಗೆ ಹೊರಟೆವು ಬೆಳ್ಳಿಗೆ ಬಂದು ನೋಡಿದಾಗ ನಮ್ಮ ಸಾಮಗ್ರಿಗಳು ಜೊತೆಗೆ ಕಟ್ಟಡ ನಿರ್ಮಾಣಕ್ಕಾಗಿ ಇಟ್ಟಿದ್ದ ಕಂಬಿಗಳನ್ನು ಕಳವು ಮಾಡಲಾಗಿದೆ. ನಮ್ಮ ಜೀವನಕ್ಕೆ ಆಧಾರವಾಗಿದ್ದ ಕಟ್ಟಡ ನಿರ್ಮಾಣಕ್ಕೆ ಅವಶ್ಯಕವಿದ್ದ ವಸ್ತುಗಳನ್ನು ಖಾದೀಮರು ಕಳವು ಮಾಡಿದ್ದಾರೆ ಎಂದರು.

 

ಈ ಕುರಿತು ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು ಪ್ರಕರಣ ತನಿಖೆ ನಂತರ ಸತ್ಯ ಸತ್ಯತೆ ತಿಳಿದು ಬರಲಿದೆ

 

Comments

Leave a Reply

Your email address will not be published. Required fields are marked *