ನಿರಂತರ ಅನ್ನದಾಸೋಹ ಸಮಿತಿಯೊಟ್ಟಿಗೆ ವಿಶೇಷ ದಿನಗಳನ್ನು ಆಚರಿಸಿ : ಸಂತೃಪ್ತಿಯ ಸಂಭ್ರಮಾಚರಣೆ ಮಾಡಿ – ವರುಣ್

ದೊಡ್ಡಬಳ್ಳಾಪುರ : 1981ನೇ ದಿನದ ನಿರಂತರ ಅನ್ನದಾಸೋಹ ಸಮಿತಿಯ ದಾನಿಗಳಾಗಿ ಬೀಡಿಕೆರೆ ವರುಣ್ ರವರು ಸಹಾಯ ಹಸ್ತ ನೀಡಿದ್ದು , ಹಸಿದವರಿಗೆ ಆಹಾರ ವಿತರಣೆ ಮಾಡುವ ಮೂಲಕ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು.

ಈ ಕುರಿತು ಮಾತನಾಡುತ್ತಾ ನಮ್ಮ ಜೀವನದ ವಿಶೇಷ ದಿನಗಳಲ್ಲಿ ನಾವು ಹಲವಾರು ಉತ್ತಮ ಕಾರ್ಯಗಳನ್ನು ಮಾಡಬೇಕೆಂದುಕೊಳ್ಳುತ್ತೇವೆ ಆದರೆ ಅದು ಕೇವಲ ಯೋಚನೆ ಎಷ್ಟು ಸೀಮಿತವಾಗುತ್ತದೆ ಆದರೆ ವಿಶೇಷ ದಿನಗಳನ್ನು ಮಲ್ಲೇಶ್ ನೇತೃತ್ವದ ನಿರಂತರ ಅನ್ನ ದಾಸೋಹ ಸಮಿತಿಯೊಟ್ಟಿಗೆ ಆಚರಣೆ ಮಾಡುವುದರಿಂದ ನೂರಾರು ಹಸಿದ ಬಡವರಿಗೆ ಆಹಾರ ವಿತರಣೆ ಮಾಡುವ ಮೂಲಕ ಉತ್ತಮ ಸೇವೆಯಲ್ಲಿ ತೊಡಗುವುದು ಮನಸ್ಸಿಗೆ ಸಂತೃಪ್ತಿ ಕೊಡುತ್ತದೆ.

Ad

 

Ad

ಪ್ರತಿವರ್ಷವೂ ನನ್ನ ಹುಟ್ಟು ಹಬ್ಬವನ್ನು ಮಲ್ಲೇಶ್ ಮತ್ತು ತಂಡದೊಟ್ಟಿಗೆ ಆಚರಣೆ ಮಾಡಿಕೊಳ್ಳುವುದು ನನಗೆ ಅರ್ಥಪೂರ್ಣವೆನಿಸುತ್ತದೆ, ಸಮಾಜದಲ್ಲಿ ಪ್ರತಿಯೊಬ್ಬರೂ ತಮ್ಮ ವಿಶೇಷ ದಿನಗಳನ್ನು ಇಂತಹ ವೇದಿಕೆಗಳಲ್ಲಿ ಆಚರಣೆ ಮಾಡಿಕೊಳ್ಳುವುದು ಉತ್ತಮ, ಕಾರಣ ನಮ್ಮ ವಿಶೇಷ ಆಚರಣೆ ಹತ್ತಾರು ಕುಟುಂಬಗಳಿಗೆ,ನೂರಾರು ಹಸಿದ ಹೊಟ್ಟೆಗಳಿಗೆ ಹಸಿವು ನೀಗಿಸುವ ಮಾರ್ಗವಾಗಿದೆ ಸರ್ವರೂ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯವಾಗಿದೆ ಎಂದು.

Ad

Ad

ಕಾರ್ಯಕ್ರಮದಲ್ಲಿ ನಮ್ಮ ಕರ್ನಾಟಕ ಜನ ಸೈನ್ಯ ಸಂಘಟನೆಯ ಜಿಲ್ಲಾಧ್ಯಕ್ಷ ನಾಗರಾಜ್,ಹರೀಶ್ ರೆಡ್ಡಿ,ಮುನಿರಾಜು,ವಿಜಯ್ ಸೇರಿದಂತೆ ಹಲವರು ಹಾಜರಿದ್ದರು.

Comments

Leave a Reply

Your email address will not be published. Required fields are marked *