ಜನಧ್ವನಿ ವೇದಿಕೆಯಿಂದ ಸ್ಥಳೀಯ ಸಮಸ್ಯೆಗಳ ಸಮಾಲೋಚನಾ ಸಭೆ : ಸಮಸ್ಯೆ ಪರಿಹಾರಕ್ಕಾಗಿ ಹೋರಾಟ ಮಾಡಲು ವೇದಿಕೆ ಮುಖಂಡರ ನಿರ್ಣಯ

ದೊಡ್ಡಬಳ್ಳಾಪುರ : ತಾಲ್ಲೂಕಿನ ಬಾಶೆಟ್ಟಹಳ್ಳಿ ಪಟ್ಟಣ ಪಂಚಾಯತಿಯ ಬಾಶೆಟ್ಟಹಳ್ಳಿ ಗ್ರಾಮದ ದೊಡ್ಡಮ್ಮ ದೇವಾಲಯದ ಬಳಿ ಜನದ್ವನಿ ವೇದಿಕೆಯ ಮುಖಂಡರು ಸ್ಥಳೀಯ ಸಮಸ್ಯೆಗಳನ್ನು ಕುರಿತು ಸಮಾಲೋಚನಾ ಸಭೆ ನಡೆಸಿದರು ಈ ಸಭೆಯಲ್ಲಿ

ಜನಧ್ವನಿ ವೇದಿಕೆಯು ಜನ ಸಾಮಾನ್ಯರ ಧ್ವನಿಯಾಗಿ ಜನರ ಸಮಸ್ಯೆಗಳಿಗೆ ಸ್ವಂದಿಸುವಂತೆ ಮುಖಂಡರು ನಿರ್ಣಯಿಸಿದರು

ಈ ಸಂದರ್ಭದಲ್ಲಿ ಸ್ಥಳೀಯರು ಹಾಗೂ ಜನಧ್ವನಿ ವೇದಿಕೆಯ ಮುಖಂಡರಾದ ನಾರಾಯಣ ಸ್ವಾಮಿ ಮಾತನಾಡಿ ಭಾಷೆಟ್ಟಿಹಳ್ಳಿ ಪಂಚಾಯಿತಿಯು ಪಟ್ಟಣ ಪಂಚಾಯತಿಯಾಗಿ ಮೇಲ್ದರ್ಜೆಗೆ ಏರಿದ ಪರಿಣಾಮವಾಗಿ ಜನಸಾಮಾನ್ಯರಿಗೆ ಕಂದಾಯ ಮತ್ತು ನೀರಿನ ತೆರಿಗೆಗಳು ದುಪ್ಪಟ್ಟು ಮಾಡಿರುವ ಕಾರಣ ತೆರಿಗೆ ಕಟ್ಟಲು ಜನಸಾಮಾನ್ಯರಿಗೆ ತುಂಬಾ ಕಷ್ಟ ವಾಗುತ್ತಿದೆ. ಅವೈಜ್ಞಾನಿಕ ವಾರ್ಡುಗಳ ವಿಂಗಡಣೆ ಪರಿಣಾಮ ಚುನಾವಣೆಗಳು ನಡೆಯದೇ ಅಭಿವೃದ್ಧಿ ಕುಂಠಿತವಾಗಿದೆ . ಹೊರಗುತ್ತಿಗೆ ಅಧಿಕಾರಿಗಳು ಈಗಲೂ ಅಕ್ರಮ ಖಾತೆ ಮಾಡಿಸಿ ಕೊಡುತ್ತೇನೆ ಎಂದು ಜನ ಸಾಮಾನ್ಯರಿಗೆ ವಂಚಿಸುತ್ತಿದ್ದು ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡದ ಅಧಿಕಾರಿಗಳ ನೆಡೆಯಿಂದ ವಾರ್ಡುಗಳ ರಸ್ತೆ , ಸ್ವಚ್ಛತೆ ಹದಗೆಟ್ಟಿದೆ ಈ ರೀತಿಯ ಹತ್ತು ಹಲವು ಸಮಸ್ಯೆಗಳನ್ನು ಕುರಿತು ಚರ್ಚಿಸಲಾಗಿದೆ ಈ ಕುರಿತು ಸಮಾಲೋಚನೆ ಮಾಡಿದ ಜನಧ್ವನಿ ವೇದಿಕೆಯ ಮುಖಂಡರು ಹೋರಾಟಕ್ಕೆ ಮುಂದಾಗಲು ನಿರ್ಣಹಿಸಿದ್ದೇವೆ ಎಂದು ತಿಳಿಸಿದರು

 

ಸಭೆಯಲ್ಲಿ ಬಾಶೆಟ್ಟಹಳ್ಳಿ ಮದು, ಮುರಳಿ, ಶಿವು, ಗಂಗರಾಜು, ಹರ್ಷಿತ ನಾಯಕ ಬಿಸವಹಳ್ಳಿ ನಾರಾಯಣಸ್ವಾಮಿ, ನವೀನ್ ಎಳ್ಳುಪುರ ಮಹೇಶ.ಓಬದೇನಹಳ್ಳಿ ಮುನಿರಾಜ್, ರಾಜೇಂದ್ರ, ಅರಹಳ್ಳಿ ಗುಡದಹಳ್ಳಿ ರವಿ, ವೆಂಕಟೇಶ್, ಕಸುವನಹಳ್ಳಿ ಜಯಸಿಂಹ, ರಾಜೇಶ್. ಮತ್ತಿತರರು ಉಪಸ್ಥಿತರಿದ್ದರು

Comments

Leave a Reply

Your email address will not be published. Required fields are marked *