ಹುಟ್ಟು ಹಬ್ಬಕ್ಕೆ ಬ್ಯಾನರ್ ,ಕೇಕ್ ಹಾಗೂ ಹಾರಗಳು ಬೇಡ : ನಿಮ್ಮ ಕೈಲಾದ ಅಕ್ಕಿ ,ಬೇಳೆ ,ಸಕ್ಕರೆ ನೀಡಿ – ನಟ ದರ್ಶನ್ ಮನವಿ

ಫೆಬ್ರವರಿ 16ರಂದು ತಮ್ಮ ಹುಟ್ಟುಹಬ್ಬಕ್ಕೆ ಬ್ಯಾನರ್ ಕೇಕ್ ಹಾಗೂ ಹಾರಗಳನ್ನು ದಯಮಾಡಿ ತರಬೇಡಿ ಅದೇ ಹಣದಲ್ಲಿ ಈ ವರ್ಷವೂ ಸಹ ನಿಮ್ಮ ಕೈಲಾದ ಅಕ್ಕಿ ಬೇಳೆ ಸಕ್ಕರೆ ಹಾಗೂ ಇನ್ನಿತರ ದವಸ ಧಾನ್ಯಗಳನ್ನು ದಾನ ನೀಡಿ ಎಂದು ನಟ ದರ್ಶನ್ ಮನವಿ ಮಾಡಿದ್ದಾರೆ

ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಹುಟ್ಟು ಹಬ್ಬದ ಕುರಿತು ಪೋಸ್ಟ್ ಮಾಡಿರುವ ನಟ ದರ್ಶನ್ ಹುಟ್ಟು ಹಬ್ಬದ ಸಂಭ್ರಮಕ್ಕಾಗಿ ಹಣವನ್ನು ವ್ಯರ್ಥ ಮಾಡದೆ ಅದೇ ಹಣದಲ್ಲಿ ಕೈಲಾದ ದವಸ ಧಾನ್ಯಗಳನ್ನು ತಲುಪಿಸಲು ಮನವಿ ಮಾಡಿದ್ದಾರೆ ಸಂಗ್ರಹವಾದ ಧಾನ್ಯಗಳನ್ನು ಒಗ್ಗೂಡಿಸಿ ಅನಾಥಾಶ್ರಮ ಅಥವಾ ವೃದ್ಧಶ್ರಮಗಳಿಗೆ ಪ್ರಾಮಾಣಿಕವಾಗಿ ತಲುಪಿಸುವ ಜವಾಬ್ದಾರಿ ನನ್ನದು ಎಂದು ತಿಳಿಸಿದ್ದಾರೆ

ಹಾಗೂ ಹುಟ್ಟು ಹಬ್ಬದ ಸಂಭ್ರಮಾಚರಣೆಯ ಸಂದರ್ಭದಲ್ಲಿ ಅಕ್ಕ-ಪಕ್ಕದ ನಿವಾಸಿಗಳಿಗೆ ತೊಂದರೆಯಾಗುವುದು ಬೇಡ ಎಂದು ಹೇಳುತ್ತಾ ತಮ್ಮ ಪ್ರೀತಿಯ ಸೆಲೆಬ್ರಿಟಿಸ್ ಗೆ ನಿಬಂಧನೆಗಳನ್ನು ಹಾಕಿದ್ದಾರೆ ಪಟಾಕಿ ಹೊಡೆಯುವುದು, ಕಾಂಪೌಂಡ್ ಹತ್ತುವುದು , ಹೂ ಕುಂಡಗಳನ್ನು ಬೀಳಿಸಿ ಹಾನಿಗೊಳಿಸುವುದು ಹಾಗೂ ಇತರೆ ಅನುಚಿತ ವರ್ತನೆಗಳು ನಡೆಯಬಾರದೆಂದು ಮನವಿ ಮಾಡಿದ್ದಾರೆ ಜೊತೆಗೆ ಸಂಘದ ಕಾರ್ಯಕರ್ತರು ಮತ್ತು ಪೊಲೀಸ್ ಸಿಬ್ಬಂದಿ ವರ್ಗಕ್ಕೆ ಸಹಕರಿಸಬೇಕೆಂದು ವಿನಂತಿ ಮಾಡಿದ್ದಾರೆ

Comments

Leave a Reply

Your email address will not be published. Required fields are marked *