ಫೂಟ್ ಪಾಥ್ ತುಂಬಿದ ಕಸದ ರಾಶಿ : ಗಮನ ಹರಿಸದ ಜನಪ್ರತಿನಿಧಿಗಳು

ದೊಡ್ಡಬಳ್ಳಾಪುರ ತಾಲ್ಲೂಕಿನ ಪಾಲನಜೋಗಿಹಳ್ಳಿ ಗ್ರಾಮದ ಮುಖ್ಯರಸ್ತೆಯಲ್ಲಿ ಎಲ್ಲೂ ನೋಡಿದರೂ ಕಸದ ರಾಶಿ ತುಂಬಿದೆ .

ಗೌರಿಬಿದನೂರು ಹೆದ್ದಾರಿ ಮಾರ್ಗದ ಅಕ್ಕ ಪಕ್ಕದಲ್ಲಿ ಕಸ ತುಂಬಿದ್ದು ಸಾರ್ವಜನಿಕರು ಸಂಚರಿಸುವ ಪಾದಚಾರಿ ಮಾರ್ಗ ಕಸದಿಂದ ತುಂಬಿದೆ. ಸ್ಥಳೀಯ ಜನಪ್ರತಿನಿಧಿಗಳ ವಿರುದ್ಧ ಗ್ರಾಮಸ್ಥರು ಹಿಡಿ ಶಾಪ ಹಾಕುತ್ತಿದ್ದಾರೆ..

ಪಾಲನಜೋಗಿಹಳ್ಳಿ ಪಾದಚಾರಿಗಳ ಮಾರ್ಗ ಸಂಪೂರ್ಣ ಕಸದಿಂದ ತುಂಬಿದ್ದು ಸಾರ್ವಜನಿಕರು ಹೆದ್ದಾರಿಯ ಮೇಲೆ ನಡೆದಾಡುವಂಥಾಗಿದೆ .ಈ ಕೂಡಲೇ ಸ್ಥಳೀಯ ಜನಪ್ರತಿನಿಧಿಗಳು ಎಚ್ಚೆದ್ದು ಕಸದ ರಾಶಿಯನ್ನು ತೆರವುಗೊಳಿಸಿ ಸಾರ್ವಜನಿಕರು ಪಾದಚಾರಿ ಮಾರ್ಗ ಬಳಸಲು ಅನುವು ಮಾಡಿಕೊಡಬೇಕೆಂದು ಸ್ಥಳೀಯರು ಮನವಿ ಮಾಡಿದರು .

Comments

Leave a Reply

Your email address will not be published. Required fields are marked *