ರಾಜ್ಯ ವಿ-ಕರವೇ ಹಾಗೂ ಕನ್ನಡ ಪರ ಸಂಘಟನೆಯ ಒಕ್ಕೂಟ ದಿಂದ 69 ನೇ ಕನ್ನಡ ರಾಜ್ಯೋತ್ಸವ ಹಾಗು 51 ನೇ ಸುವರ್ಣ ಮಹೋತ್ಸವವನ್ನು ಆಚರಣೆ

ದೊಡ್ಡಬಳ್ಳಾಪುರ : ಹೆಸರಾಯಿತು ಕರ್ನಾಟಕ ಉಸಿರಾಗಲಿ ಕನ್ನಡ ಎಂಬಂತೆ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆ ಹಾಗು ಕನ್ನಡ ಪರ ಸಂಘಟನೆಯ ಒಕ್ಕೂಟ ದಿಂದ 69 ನೇ ಕನ್ನಡ ರಾಜ್ಯೋತ್ಸವ ಹಾಗು 51 ನೇ ಸುವರ್ಣ ಮಹೋತ್ಸವವನ್ನು ಆಚರಣೆ ಮಾಡಲಾಯಿತು.

 

ನಗರದ ಡಿಕ್ರಾಸ್ ಮುಖ್ಯ ರಸ್ತೆಯಲ್ಲಿ ಆಯೋಜನೆ ಮಾಡಲಾಗಿದ್ದ ರಾಜ್ಯೋತ್ಸವ ಕಾರ್ಯಕ್ರಮವನ್ನು ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಂಸ್ಥಾಪಕ ಅಧ್ಯಕ್ಷ ಎ. ನಂಜಪ್ಪ ಉದ್ಘಾಟನೆ ಮಾಡಿ ಮಾತನಾಡಿದರು, ಭಾರತದ ಸ್ವಾತಂತ್ರ್ಯದ ನಂತರ ದೇಶದ 500 ಹೆಚ್ಚು ಸಂಸ್ಥಾನಗಳಲ್ಲಿ ಭಾಷಾವಾರು ಪ್ರಾಂತ್ಯಗಳನ್ನು ಒಗ್ಗೂಡಿಸಿ ಕನ್ನಡ ನಾಡನ್ನು ಮೈಸೂರ ಸಂಸ್ಥಾನ ವೆಂದು ಕರೆಯುತ್ತಿದ್ದರು ಮೈಸೂರು ರಾಜ್ಯವನ್ನು ಮಾ ರಾಮಮೂರ್ತಿ ಅರೂರು ವೆಂಕಟರಾಯರು ವಿ.ಕೃ ಗೋಕಾಕ್ ತು .ಸು. ಶ್ಯಾಮಸಂದರ್ 1972 ನವಂಬರ್ 1 ರಂದು ಕರುನಾಡು ಕರ್ನಾಟಕ ವೆಂದು ನಾಮಕರಣ ಮಾಡಲಾಗಿದ್ದು ಇಂದಿಗೆ 51 ವರ್ಷ ಕಳೆದರು ನಮ್ಮ ಕನ್ನಡ ನಾಡು ನುಡಿ ನೆಲ ಜಲ ಬಗ್ಗೆ ಹೋರಾಟ ಮಾಡಿ ಪಡೆಯುವಂತೆ ವ್ಯವಸ್ಥೆ ನಮ್ಮದಾಗಿದೆ ಕಾರ್ಖಾನೆಗಳಲ್ಲಿ ಬ್ಯಾಂಕ್ ಕನ್ನಡಿಗರಿಗೆ ಮಾನ್ಯತೆ ಇಲ್ಲ ಇದು ನಾವು ಉಳಿಯಬೇಕಾದರೆ ನಮ್ಮ ಹಕ್ಕು ನಮ್ಮ ಭಾಷೆಯನ್ನು ಉಳಿಸಿ ಬೇಕಾಗಿದೆ ಎಂದರು

 

ನಂತರ ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಮಿಕ ಘಟಕದ ಅಧ್ಯಕ್ಷ ಹನುಮಂತರೆಡ್ಡಿ ಮಾತನಾಡಿ ಮನೆಯಲ್ಲಿ ಮಕ್ಕಳಿಗೆ ಮಮ್ಮಿ ಡ್ಯಾಡಿ ಅಂಕಲ್ ಎಂದು ಸಂಭೋದಿಸುವ ಬದಲು ಅಮ್ಮ ಅಪ್ಪ ಚಿಕ್ಕಪ್ಪ ದೊಡ್ಡಪ್ಪ ಎಂದು ಹೇಳಿ ಕೊಟ್ಟರೆ ಕನ್ನಡ ಭಾಷೆಗೆ ಗೌರವ ಕೊಟ್ಟಂತೆ ಪಾಶ್ಚಿಮಾತ್ಯ ಭಾಷೆ ಹಿಂದೆ ಹೋಗುವುದು ಬಿಟ್ಟು ನಮ್ಮ ತಾಯಿ ಭಾಷೆ ಮೂದಲು ಗೌರವಿಸಿ ನಮ್ಮ ಭಾಷೆಗಾಗಿ ಅನೇಕ ಮಹನೀಯರು ತ್ಯಾಗ ಬಲಿದಾನದಿಂದ ರಚನೆಯಾದ ಅಖಂಡ ಕರ್ನಾಟಕವನ್ನು ನಾವು ಉಳಿಸಿ ಬೆಳೆಸುವುದು ನಮ್ಮ ಆಧ್ಯ ಕರ್ತವ್ಯವಾಗಿದೆ. ಬೇರೆ ರಾಜ್ಯ ದೇಶದಿಂದ ಬಂದಿರುವ ಕಾರ್ಮಿಕರಿಗೆ ಕನ್ನಡ ಭಾಷೆಯ ಬಗ್ಗೆ ಅರಿವು ಮುಡಿಸಿ ಮಾತನಾಡಲು ಕಲಿಸಿದೆ ಅದರೆ ಕನ್ನಡ ಭಾಷೆ ಉಳಿಯಲು ಸಾಧ್ಯ ಎಂದರು

 

ಕಾರ್ಯಕ್ರಮದಲ್ಲಿ ಮಾಜಿ ನಗರ ಸಭಾ ಸದಸ್ಯೆ ಅನುಸೂಯಮ್ಮ, ರಾಜ್ಯ ವಿಜಯ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಸಮಿತಿಯ ನಯಾಜ್ ಖಾನ್,ಕೆ ಆರ್ ಪಕ್ಷದ ಜಿಲ್ಲಾಧ್ಯಕ್ಷ ಶಿವಶಂಕರ, ಬಿ. ಸೋಮರಾಜು, ಗಂಗರಾಜು, ಅಜಯ್ ಕುಮಾರ್,ಜಿಲ್ಲಾಧ್ಯಕ್ಷ ಮಂಜುನಾಥ,ಯುವ ಜಿಲ್ಲಾಧ್ಯಕ್ಷ ಪಣೀಶ್,ಮಹಿಳಾ ಜಿಲ್ಲಾಧ್ಯಕ್ಷ ಶಶಿಕಲಾ,ಕಾರ್ಯದರ್ಶಿ ರೇಷ್ಮಾ ಖಾನಂ , ತಾಲೂಕು ಅಧ್ಯಕ್ಷ ಹರಿ ಕುಮಾರ್. ಚಂದ್ರಶೇಖರಯ್ಯ. ನವೀನ್ ಕುಮಾರ್. ವಿದ್ಯಾಧರ. ನಗರ ಅಧ್ಯಕ್ಷ ಚರಣ್ ಕುಮಾರ್ ಸರ್ಕಾರಿ ಅಸ್ಪತ್ರೆಯ ರಾಜು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

Comments

Leave a Reply

Your email address will not be published. Required fields are marked *