ಕೆಸ್ತೂರು ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷರಾಗಿ ಹುಸ್ಕೂರು ಬಿ.ಮಂಜುನಾಥ್ ಅವಿರೋಧ ಆಯ್ಕೆ

ದೊಡ್ಡಬಳ್ಳಾಪುರ : ಕೆಸ್ತೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹುಸ್ಕೂರು ಬಿ.ಮಂಜುನಾಥ್ ಅವಿರೋಧವಾಗಿಯಾಗಿದ್ದಾರೆ.

ಕೆಸ್ತೂರು ಗ್ರಾಮ ಪಂಚಾಯಿತಿ ಪ್ರಭಾರ ಅಧ್ಯಕ್ಷರಾದ ಆಂಜಿನಮ್ಮ ರಾಜೀನಾಮೆ ನೀಡಿದ್ದರು, ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಫೆಬ್ರವರಿ 10ರ ಸೋಮವಾರ ಚುನಾವಣೆ ನಡೆಸಲಾಗಿತ್ತು, ಅಧ್ಯಕ್ಷ ಸ್ಥಾನಕ್ಕೆ ಹುಸ್ಕೂರ್ ಮಂಜುನಾಥ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ನೂತನ ಅಧ್ಯಕ್ಷರಾಗಿ ಬಿ.ಮಂಜುನಾಥ್ ಅವಿರೋಧವಾಗಿ ಚುನಾಯಿತರಾಗಿದ್ದಾರೆ,

 

ನೂತನ ಅಧ್ಯಕ್ಷರಿಗೆ ಹೂಮಾಲೆ ಹಾಕುವ ಮೂಲಕ ಮುಖಂಡರು ಸೇರಿದಂತೆ ಗ್ರಾಮಸ್ಥರು ಅಭಿನಂದಿಸಿದರು 

 

ಇದೇ ವೇಳೆ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಅಧ್ಯಕ್ಷನಾಗಲು ಅವಕಾಶ ನೀಡಿದ ಶಾಸಕರಾದ ಧೀರಜ್ ಮುನಿರಾಜು, ಜೆಡಿಎಸ್ ಜಿಲ್ಲಾಧ್ಯಕ್ಷರಾದ ಬಿ.ಮುನೇಗೌಡ, ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್, ಸದಸ್ಯರು ಗ್ರಾಮಸ್ಥರಿಗೆ ನಾವು ಕೃತಜ್ಞತೆ ಸಲ್ಲಿಸುವೆ, ಎಲ್ಲರ ಸಹಕಾರದೊಂದಿಗೆ ಗ್ರಾಮದ ಅಭಿವೃದ್ಧಿಗಾಗಿ ಕೆಲಸ ಮಾಡುವುದ್ದಾಗಿ ಹೇಳಿದರು

 

ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳಾದ ನೀರು,ಚರಂಡಿ,ರಸ್ತೆ ಸೌಲಭ್ಯ ಮತ್ತು ಗ್ರಾಮಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವ ಕೆಲಸ ಮಾಡಲಾಗುವುದು, ಇನ್ನೊಂದು ತಿಂಗಳಲ್ಲಿ ಪ್ರತಿಯೊಂದು ಗ್ರಾಮಕ್ಕೂ ಹೈಮಾಸ್ಟ್ ದೀಪಗಳ ಹಾಕುವುದ್ದಾಗಿ ಹೇಳಿದರು

 

ಈ ವೇಳೆ ಜೆಡಿಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸ್ಕೂರು ಆನಂದ್, ಉಪಾಧ್ಯಕ್ಷರಾದ ಅಂಜಿನಮ್ಮ, ಸದಸ್ಯರಾದ ಮುರುಳಿ, ಗಾಯಿತ್ರಿ, ಅಶ್ವಥ್ ನಾರಾಯಣ್, ಮುನಿರಾಜು, ರಾಜಮ್ಮ, ಕೃಷ್ಣಪ್ಪ, ಶೃತಿ, ಲಕ್ಷಮ್ಮ, ಮಧುಮಾಲತಿ, ರಾಜಣ್ಣ, ವಿಜಿಕುಮಾರ್,ಯಾಸ್ಮಿನ್ ತಾಜ್, ಪಂಕಜ, ಶ್ರವಣೂರು ರಾಜಮ್ಮ ಮುಖಂಡರಾದ ಅಶ್ವಥ್ ನಾರಾಯಣ್, ಪುಟ್ಟಬಸವರಾಜು, ವಿಜಯಕುಮಾರ್, ಕುಮಾರ್, ಲಕ್ಷ್ಮಿನಾರಾಯಣ್ ಹಾಜರಿದ್ದರು.

 

Comments

Leave a Reply

Your email address will not be published. Required fields are marked *