ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಮಾರಸಂದ್ರ ಗ್ರಾಮಸ್ಥರಿಂದ 15ನೇ ವರ್ಷದ ಲಕ್ಷದೀಪೋತ್ಸವ : ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ

ದೊಡ್ಡಬಳ್ಳಾಪುರ : ಶ್ರೀ ಕೊಂಡದಮ್ಮ ಈರಮಾಸಮ್ಮ ತಾಯಿಗೆ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಲಕ್ಷದೀಪೋತ್ಸವ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು.

ತಾಲ್ಲೂಕಿನ ಮಧುರೆ ಹೋಬಳಿಯ ಮಾರಸಂದ್ರ ಗ್ರಾಮದ ಶ್ರೀ ಕೊಂಡದಮ್ಮ (ಈರಮಾಸ್ತಮ್ಮ) ಸೇವಾ ಸಮಿತಿ (ರಿ.)ವತಿಯಿಂದ 15ನೇ ವರ್ಷದ ಲಕ್ಷದೀಪೋತ್ಸವ ಹಾಗೂ ಕೊಂಡದಮ್ಮ (ಈರಮಾಸ್ತಮ್ಮ) ದೇವಿಗೆ ವಿಶೇಷವಾಗಿ ಹೂವಿನ ಅಲಂಕಾರ ಪೂಜಾ ಕಾರ್ಯಕ್ರಮ ನೆರವೇರಿಸಲಾಯಿತು.

 

ದೇವಾಲಯಕ್ಕೆ ಆಗಮಿಸಿದ ಭಕ್ತವೃಂದದವರಿಗೆ ಊಟದ ವ್ಯವಸ್ಥೆ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದಲ್ಲಿ ಟಿ ಮಂಜುನಾಥ್,ಎಸ್ ಮಲ್ಲಯ್ಯ, ಎಂ ಆರ್ ರಮೇಶ್ ಚಂದ್ರಶೇಖರ್, ಪದ್ಮಭಾಯಿ,ನಾಗೇಂದ್ರ ರಾವ್, ಸ್ವಾಮಿ, ಬಾನವರಾಜ್,ರೇಣುಕಾ ಪ್ರಸಾದ್, ನರಸಿಂಹರಾವ್,ವೀರುಪಾಕ್ಷಪ್ಪ ಹಾಗೂ ಸೇವಾ ಸಮಿತಿ ಸದಸ್ಯರು ಮಾರಸಂದ್ರ ಗ್ರಾಮಸ್ಥರು ಹಾಗೂ ಕನಸವಾಡಿ ಗ್ರಾಮಸ್ಥರು ಉಪಸ್ಥಿತರಿದ್ದರು.

Comments

Leave a Reply

Your email address will not be published. Required fields are marked *