“ಪೂರ್ವಾರಾಧನೆ” “ಮಧ್ಯಾರಾಧನೆ” “ಉತ್ತರರಾಧನೆ” ಮೂಲಕ ನೆಡೆಯಲಿದೆ “354” ಶ್ರೀಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವ – ಜಿ. ಗುರುರಾಜಚಾರ್

ದೊಡ್ಡಬಳ್ಳಾಪುರ : ಬಾಶೆಟ್ಟಿಹಳ್ಳಿ ವಿಜಯನಗರದಲ್ಲಿ ಶ್ರೀ ಕ್ಷೇತ್ರ ರಾಯರ ಮಠದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ “ಆರಾಧನಾ ಮಹೋತ್ಸವ”ವನ್ನು ಶ್ರೀ ಹರಿವಾಯು ಗುರುಗಳ ಪ್ರೇರಣಾನುಸಾರ ಶ್ರಾವಣ ಮಾಸ ಕೃಷ್ಣಪಕ್ಷ ಪ್ರಥಮ, ದ್ವಿತೀಯ, ತೃತೀಯ ದಿನಗಳಂದು ನೆರವೇರಿಸಲಾಗುವುದು ಎಂದು ಶ್ರೀ ಮಠದ ಪ್ರಧಾನ ಅರ್ಚಕರಾದ ಶ್ರೀ ಜಿ. ಗುರುರಾಜಚಾರ್ ತಿಳಿಸಿದ್ದಾರೆ

354″ ಶ್ರೀಗುರುರಾಘವೇಂದ್ರ ಸ್ವಾಮಿಗಳ ಆರಾಧನಾ ಮಹೋತ್ಸವವನ್ನು ಆಗಸ್ಟ್10,11,ಮತ್ತು 12 ರಂದು ನೆರವೇರಿಸಲಿದ್ದು ಕಾರ್ಯಕ್ರಮವು“ಪೂರ್ವಾರಾಧನೆ” “ಮಧ್ಯಾರಾಧನೆ” “ಉತ್ತರರಾಧನೆ” ಮೂಲಕ ನೆಡೆಯಲಿದೆ.

ಈ ಕುರಿತು ಮಾಹಿತಿ ನೀಡಿರುವ ಅವರು ಆಗಸ್ಟ್ 10 ರಂದು ಪೂರ್ವಾರಾಧನೆಯಲ್ಲಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ,ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಬೆಳಿಗ್ಗೆ ಮತ್ತು ಸಂಜೆ “ಭಜನೆ ಕಾರ್ಯಕ್ರಮ” ಮತ್ತು ಮಹಾಮಂಗಳಾರತಿ ನೆಡೆಯಲಿದೆ.

2ನೇ ದಿನ ಮಧ್ಯಾರಾಧನೆಯ ವಿಶೇಷ ವಾಗಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ ಬೆಳಿಗ್ಗೆ 9 ಕ್ಕೆ ಶ್ರೀ ರಮಾ ತ್ರಿವಿಕ್ರಮ ಭಜನಾ ಮಂಡಳಿಯವರಿಂದ “ಭಜನೆ ಮತ್ತು ವಾದ್ಯಗೋಷ್ಠಿ” “ಚಂಡೇವಾದ್ಯ” ಬೆಳಿಗ್ಗೆ 9.30ಕ್ಕೆ ರಾಜಬೀದಿಯಲ್ಲಿ “ರಥೋತ್ಸವ” ಕಾರ್ಯಕ್ರಮ ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ನೆಡೆಯಲಿದೆ.

ಹಾಗೂ 3ನೇ ದಿನದ ಉತ್ತರರಾಧನೆ ಅಂಗವಾಗಿ ಬೆಳಿಗ್ಗೆ 6.00 ಗಂಟೆಗೆ ಸುಪ್ರಭಾತ ಸೇವೆ, ನಿರ್ಮಾಲ್ಯ ವಿಸರ್ಜನೆ, 7.30ಕ್ಕೆ ಪಂಚಾಮೃತ ಅಭಿಷೇಕ, ಪಾದಪೂಜೆ, ಅರ್ಚನೆ ಅಲಂಕಾರ, ಶ್ರೀ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ, ಸ್ತೋತ್ರ,ಮಧ್ಯಾಹ್ನ 12.30ಕ್ಕೆ ಮಹಾಮಂಗಳಾರತಿ ಮತ್ತು ತೀರ್ಥ ಪ್ರಸಾದ ವಿನಿಯೋಗ ಸಂಜೆ “ಭಜನೆ ಕಾರ್ಯಕ್ರಮ” ಮತ್ತು ಮಹಾಮಂಗಳಾರತಿ, ತೀರ್ಥ ಪ್ರಸಾದ ವಿನಿಯೋಗ ಕಾರ್ಯಕ್ರಮಗಳು ನೆಡೆಯಲಿವೆ ಎಂದು ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಶ್ರೀ ಗುರುರಾಘವೇಂದ್ರ ಸಾರ್ವಭೌಮರ ಅನುಗ್ರಹಕ್ಕೆ ಪಾತ್ರರಾಗಬೇಕೆಂದು ವಿನಂತಿ ಮಾಡಿದ್ದಾರೆ.

ಜೊತೆಗೆ ಆಗಸ್ಟ್ 16ರಂದು “ಶ್ರೀ ಕೃಷ್ಣ ಜನ್ಮಾಷ್ಟಮಿ” ಅಂಗವಾಗಿ ಶ್ರೀ ಕೃಷ್ಣನಿಗೆ ಸಂಜೆ 7-00 ರಿಂದ 9-30ರವರೆಗೆ ವಿಶೇಷ ಪೂಜೆ, ಮಹಾಮಂಗಳಾರತಿ ಮತ್ತು ತೀರ್ಥಪ್ರಸಾದ ವಿನಿಯೋಗ ನೆಡೆಯಲಿದೆ 

 

ದಾನಿಗಳು ಶ್ರೀ ರಾಯರ ಪೂಜಾ ಕೈಂಕರ್ಯಗಳಿಗೆ ಸೇವೆ ಸಲ್ಲಿಸಲು ಇಚ್ಛೆಸುವ ದಾನಿಗಳು ಪ್ರಧಾನ ಅರ್ಚಕರಾದ ಶ್ರೀ ಜಿ. ಗುರುರಾಜಚಾರ್ (9535981175) ಅವರನ್ನು ಸಂಪರ್ಕಿಸಲು ಕೋರಿದೆ

 

 

Comments

Leave a Reply

Your email address will not be published. Required fields are marked *