ವೃತ್ತಿಯಲ್ಲಿ ವಕೀಲರಾದರು ಕನ್ನಡ ನಾಡು, ನುಡಿ ಹಾಗೂ ಜಲ ವಿಚಾರವಾಗಿ ರವಿ ಮಾವಿನಕುಂಟೆ ಸದಾ ಮುಂದು – ಕರವೇ ಪುರುಷೋತ್ತಮ್

ದೊಡ್ಡಬಳ್ಳಾಪುರ : 46ನೇ ವಸಂತಕ್ಕೆ ಕಾಲಿಡುತ್ತಿರುವ ತಾಲೂಕಿನ ಸಮಾಜಸೇವಕರು,ಖ್ಯಾತ ವಕೀಲರು ಹಾಗೂ ಕನ್ನಡ ಪರ ಹೋರಾಟಗಾರರಾದ ರವಿ ಮಾವಿನಕುಂಟೆಯವರಿಗೆ ಕನ್ನಡಪರ ಹೋರಾಟಗಾರ ಕರವೇ ಪುರುಷೋತ್ತಮ್ ಗೌಡ ಶುಭಕೋರಿದ್ದಾರೆ .

 

ಈ ಕುರಿತು ವಿಜಯ ಮಿತ್ರ ವೆಬ್ ನ್ಯೂಸ್ ಜೊತೆ ಮಾತನಾಡಿದ ಅವರು ವೃತ್ತಿಯಲ್ಲಿ ವಕೀಲರಾದರು ಕನ್ನಡ ನಾಡು, ನುಡಿ ಹಾಗೂ ಜಲ ವಿಚಾರವಾಗಿ ಸದಾ ವಿಭಿನ್ನ ಶೈಲಿಯಲ್ಲಿ ಹೋರಾಟ ನಡೆಸಿಕೊಂಡು ಬಂದಿದ್ದಾರೆ. ತಮ್ಮ ನೇರ ನುಡಿ , ಕನ್ನಡ ಭಾಷಾಭಿಮಾನ ಸದಾ ಆಕರ್ಷಣೀಯ ಅವರಿಗೆ ತಾಯಿ ಭುವನೇಶ್ವರಿ ಮತ್ತಷ್ಟು ಶಕ್ತಿ ತುಂಬುವ ಮೂಲಕ ನಾಡು ನುಡಿಯ ಸೇವೆ ಮಾಡಲು ಆಶೀರ್ವದಿಸಲಿ ಎಂದು ಹಾರೈಸುತ್ತೇನೆ ಎಂದಿದ್ದಾರೆ.

 

ನಾರಾಯಣಗೌಡರ ವೇದಿಕೆಯ ಕರವೇ ಸದಾ ಕನ್ನಡ ಭಾಷೆಯ ಉಳಿಯುವುದಾಗಿ ಹೋರಾಡುವ ಯಾವುದೇ ಹೋರಾಟಗಾರರನ್ನು ನಮ್ಮವರೇಂದು ಭಾವಿಸುತ್ತದೆ ಅಂತೆಯೇ ಖ್ಯಾತ ವಕೀಲದ ರವಿ ಮಾವಿನಕುಂಟೆಯವರಿಗೆ ನಮ್ಮ ಕರವೇ ತಂಡದ ಪರವಾಗಿ ಹುಟ್ಟುಹಬ್ಬದ ಶುಭಾಶಯಗಳನ್ನು ಕೋರುತ್ತಿದ್ದೇವೆ ಅವರಿಗೆ ಶುಭವಾಗಲಿ ಎಂದು ತಿಳಿಸಿದ್ದಾರೆ.

Comments

Leave a Reply

Your email address will not be published. Required fields are marked *