ದೇಶದ ಸರ್ವೋಚ್ಛ ನ್ಯಾಯಪೀಠಕ್ಕಾದ ಇಂತಹ ಅಪಮಾನ – ಅರುಣ್ ಕುಮಾರ್

ದೊಡ್ಡಬಳ್ಳಾಪುರ : ಸಿಜೆಐ ಬಿ.ಆರ್.ಗವಾಯಿರವರ ಮೇಲೆ ಶೂ ಎಸೆತ ಯತ್ನ ಪ್ರಕರಣವನ್ನ ತೀರ್ವವಾಗಿ ಖಂಡಿಸಿರುವ ಅಂಬೇಡ್ಕರ್ ಸೇವಾ ಸಮಿತಿಯ ತಾಲೂಕು ಅಧ್ಯಕ್ಷರಾದ ಅರುಣ್ ಕುಮಾರ್ ಮನುವಾದಿಗಳ ಅಟ್ಟಹಾಸಕ್ಕೆ ಕೊನೆ ಯಾವಾಗ ಎಂದು ಪ್ರಶ್ನಿಸಿದ್ದಾರೆ.

ಆಕ್ಟೋಬರ್ 6 ರಂದು ಭಾರತ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿರವರ ಮೇಲೆ ವಕೀಲ ರಾಕೇಶ್ ಕಿಶೋರ್ ಶೂ ಎಸೆಯುವ ಯತ್ನ ನಡೆಸಿದರು, ಕೃತ್ಯ ಖಂಡಿಸಿ ಭಾರತದಾದ್ಯಂತ ಅಕ್ರೋಶ ವ್ಯಕ್ತವಾಗಿದೆ, ದೇಶದೆಲ್ಲಡೆ ಕೃತ್ಯದ ವಿರುದ್ಧ ಪ್ರತಿಭಟನೆಗಳು ನಡೆಯುತ್ತಿದೆ.

ಸಿಜೆಐರವರ ಮೇಲಿನ ಶೂ ಎಸೆತ ಯತ್ನವನ್ನು ಖಂಡಿಸಿದ ದಲಿತ ಯುವ ಮುಖಂಡರಾದ ಅರುಣ್ ಕುಮಾರ್, ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರ ಮೇಲೆ ಶೂ ಎಸೆಯಲು ಯತ್ನಿಸಿರುವ ಘಟನೆ ನಿಜಕ್ಕೂ ಖಂಡನೀಯ.

ಈ ನೆಲದ ಕಾನೂನು ಹಾಗೂ ಸಂವಿಧಾನಿಕ ಸ್ಥಾನಗಳನ್ನು ಗೌರವಿಸುವುದು ಪ್ರತಿಯೊಬ್ಬರ ಜವಾಬ್ದಾರಿ ದೇಶದ ಸರ್ವೋಚ್ಛ ನ್ಯಾಯಪೀಠಕ್ಕಾದ ಇಂತಹ ಅಪಮಾನ , ಇಂದು ಸುಪ್ರೀಂ ಕೋರ್ಟ್ ನಲ್ಲಿ ನಡೆದ ಘಟನೆಯಾಗಿದ್ದು , ನ್ಯಾಯಾಂಗಕ್ಕೆ ಹಾಗು ಸಂವಿಧಾನಕ್ಕೆ ಮಾಡಿದ ಅವಮಾನ ಇದನ್ನು ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ಸಂಘಟನೆ ಖಂಡಿಸುತ್ತೇವೆ ಎಂದಿದ್ದಾರೆ.

Comments

Leave a Reply

Your email address will not be published. Required fields are marked *